ಕೈಲಾಸಂ ಅತ್ಯಂತ ಜನಪ್ರಿಯವ್ಯಕ್ತಿಯಾಗಿದ್ದವರು. ಅವರ ಮಾತುಗಳೇ ಅವರ ಬಂಡವಾಳವಾಗಿದ್ದದ್ದು ಒಂದಾದರೆ, ಯಾರನ್ನೂಎದುರುಹಾಕಿಕೊಳ್ಳುವ ಸ್ವಭಾವ ಅವರದಾಗಿರಲಿಲ್ಲ. ಈ ವಿಷಯದಲ್ಲಿ ಅವರು ಅವರ ತಂದೆಯವರಿಗೆ ತದ್ವಿರುದ್ಧವಾಗಿದ್ದರು ! ಆಗಿನಕಾಲದಲ್ಲಿ ಇಂಗ್ಲೆಂಡ್ ಗೆ ಹೋಗಿ ಪದವಿ ಪಡೆದ ಅತ್ಯಂತ ಮೇಧಾವಿಯಾದ ಕನ್ನಡದ ವ್ಯಕ್ತಿಯೊಬ್ಬ, ಇಷ್ಟು ಸರಳವಾಗಿ ಎಲ್ಲರೊಡನೆ ಬೆರೆಯುವರಲ್ಲ, ಎಂಬ ಒಂದು ವಿಷಯಕ್ಕೇ ಅವರು ಮೊದಲು ಜನರಿಗೆ ಬೇಕಾದವರಾಗುತ್ತಿದ್ದರು. ನಂತರ ಅಂಥವರಿಗೆ ಮನೆಯಲ್ಲಿ ಪುರಸ್ಕಾರ ದೊರೆಯದಿದ್ದಾಗ, ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಜನರು ಹೆಚ್ಚಾದರು. ಕೊನೆಯದಾಗಿ ಮಾತು ಮಾತಿಗೂ ನಗೆ ಚಟಾಕಿಗಳನ್ನು ಗಾಳಿಗೆ ತೂರುಬಿಡುತ್ತಿದ್ದ ಅವರ ದಿಢೀರ್ ಹಾಸ್ಯದ ಬಗೆ, ಎಂತಹವರನ್ನೂ ಸೂಜಿಗಲ್ಲಿನಂತೆ ಆಕರ್ಶಿಸಿತ್ತು ! ಸುಮಾರು ೨೦ ವರ್ಷ ಚಿಕ್ಕವರಾಗಿದ್ದ ಡಾ. ಶಿವರಾಂ, ಕೈಲಾಸಂರವರ ಮನೆಯ ಸದಸ್ಯರಂತೆ ಇದ್ದರು. ತಂದೆ ಜಸ್ಟಿಸ್ ಪರಮಶಿವ ಅಯ್ಯರ್ ಗೆ ತೀರ ಬೇಕಾಗಿದ್ದ, ವಲಯದಲ್ಲಿದ್ದರು. ’ರಾಮಸ್ವಾಮಯ್ಯ ಶಿವರಾಮ್ ” (೧೦, ನವೆಂಬರ್, ೧೯೦೫-೧೩, ಜನವರಿ, ೧೯೮೪) ಚಿಕ್ಕವರಾಗಿದ್ದಾಗ ರಾಶಿಯವರು ಬಡತನದ ಬೇಗೆಯಯನ್ನು ಅನುಭವಿಸಿದವರು. ದೊಡ್ಡ ಸಂಸಾರದ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಿದವರು, ವೈದ್ಯಕೀಯ ಶಿಕ್ಷಣವನ್ನು ಅಂತಹ ಪರಿಸರದಲ್ಲಿ ಹೇಗೆ ಮಾಡಿದರೋ ಅವರಿಗೇ ಒಮ್ಮೆ ವಿಸ್ಮಯವಾಗುತ್ತಿತ್ತು. ’ ರಾಶಿ’ಯವರ ಜನನ, ಮತ್ತು ಬಾಲ್ಯದ
Comments
Post a Comment